ಒಂಟೆಗಳಿಗೆ ನಗುವೋ ನಗು

ಉದ್ದಗಲ ಮರುಭೂಮಿ ಕೊರೆಯುವ ಬಿಸಿಲು
ದಿನಗಳೇ ರಣ ರಣ ಮಟ ಮಟ ಮಧ್ಯಾನ್ಹ
ಕೊನೆ ಇರದ ದಾರಿ ಸತ್ತು ಹೋದ ಮಣ್ಣು
ತಂಪು ಇಂಪಿಲ್ಲದ ಸಂಜೆಗೆ
ಡೇರಿ ಹೂಡುವ ಯಾತ್ರಿಕರ
ಬಿಡುಗಡೆಯಾಗುವ ಒಂಟೆಗಳ ಸಂಭ್ರಮ.
ಗುಂಪು ಗುಂಪುಗಳ ಎಷ್ಟೊಂದು ಒಂಟೆಗಳು
ಮಾತುಕತೆ ಇನ್ನೂ ಎಷ್ಣು ದೂರ
ಮೆಲುಕುತ್ತ ಮೈಲೇಜ್ ಎನಿಸುತ್ತವೇನೋ!
ಓಯಸಿಸ್ ಇಲ್ಲ
ನೀರಿಲ್ಲದ ಊಟವಿಲ್ಲದ ದಂಡಿಗೆ ಸುಸ್ತು
ಆರಿಸಿ ದಷ್ಟಪುಷ್ಟದ ಒಂಟೆ ಎಳೆದು
ಆಯಿತಲ್ಲ ಎರಡೂ
ರುಂಡ ಸಿಡಿಸಿ ಹೊಟ್ಟೆಯೊಡೆದು
ನೀರೆಳೆದು ಬೆಂಕಿಗೆ ತಳ್ಳಿ ಸುಟ್ಟು
ತಿಂದಿದ್ದೇನು ಮಜ ಅವರಿಗೆ
ಕರುಳು ಕಳೆದುಕೊಂಡಿದ್ದೇನು ದುಃಖ
ಇವುಗಳಿಗೆ.
ಶತ ಶತಮಾನದ ದಲಿತಗಳಿವು
ಇದ್ದರೂ ಶಕ್ತಿ ಎದುರಿಸಲಾರದ ಶೋಷಿತಗಳಿವು
ಧ್ವನಿ ಇಲ್ಲದ ಗುಂಪುಗಳಿವು
ಸ್ವತಂತ್ರವಿಲ್ಲದ ದೇಸಿಗಳು
ಅಬ್ಬಬ್ಬಾ ಎಷ್ಟೊಂದು ಸಹನೆ,
ಆದರೂ ಒಳಗೊಳಗೆ ಕೊರಗುವ ದುಃಖ ದುಮ್ಮಾನ
ಈಗೀಗ ಪಾತ್ರವಾಗಿವೆ
ಅಲ್ಲಾನ ನಾಡಿನ ಅಲ್ಲಾನ ಕೃಪೆಗೆ
ಮರುಹುಟ್ಟು ಪಡೆದಿವೆ.

ಈಗ ಉದ್ದಗಲದ ಮರುಭೂಮಿಗೆ
ವಿದೇಶಿ ಕಾರು ವಿಮಾನಗಳ ದಾಳಿ
ಯಾರೊಬ್ಬ ಅರಬ್ ನೋಡುತ್ತಿಲ್ಲ ಮಾತಾಡಿಸುತ್ತಿಲ್ಲ
ಒಂಟೆಗಳೊಂದಿಗೆ
ಕಟ್ಟಿ ಹಾಕುವ ಮಾಲೀಕರಿಲ್ಲ
ಹೊಟ್ಟೆಯೊಡೆದು ನೀರೆಳೆಯುವ ದರೋಡೆ ಕೋರರಿಲ್ಲ
ದಂಡೆಗೆ ಸರಿದಿವೆ ಮರುಭೂಮಿ
ಮುದಿ ಹಡಗುಗಳು
ಕಲಿಸುತಿವೆ ಮರಿಗಳಿಗೆ
ಎಲ್ಲೆಂದರಲ್ಲಿ ಮರ್ಸಿಡಿಸ್ ಬೆಂಜ್‌ನಂತೆ
ಫ್ರೀಯಾಗಿ ಓಡಾಡಲು
ಈಗೀಗ ಶಕ್ತಿ ಬಂದಿದೆ ಬೆಂಜ್
ಡಿಕ್ಕಿ ಹೊಡೆದುರುಳಿಸುವ
ಸ್ವಾತಂತ್ರ್ಯಸಿಕ್ಕಿದೆ ಅಲೆಯುವ
ವಿದೇಶಿ ತೌಡು ತಿಂದು ಮೆಲಕುಹಾಕುತ್ತ
ನಗುತ್ತವೇನೋ!
ಒಂಟೆಗಳಿಗೀಗೀಗ ರಾಯಲ್ ಟ್ರೀಟ್‍ಮೆಂಟ್
ಮಾಲೀಷ್, ವಾಕಿಂಗ್‌ಮಾಡಿಸಲು
ಬಂಗ್ಲಾ ಮಕ್ಕಳು ಬರುತ್ತಿವೆಯಂತೆ
ಒಂಟೆಗಳಿಗೆ ಒಳಗೊಳಗೊ ನಗುವೋ ನಗು.
*****

ಪುಸ್ತಕ: ಗಾಂಜಾ ಡಾಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತ್ಯಕ್ಷ ದೇವರು
Next post ಜ್ಞಾನದ ಮೊರೆ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys